ಕಲಿಕಾ
ಚೇತರಿಕೆ ೨೦೨೨
ತರಗತಿ
– ೪ ವಿಷಯ – ಕನ್ನಡ (ಪ್ರಥಮ ಭಾಷೆ)
1.ಇನ್ನೊಬ್ಬರು ಆಡುವ ಮಾತುಗಳನ್ನು ಧ್ಯಾನಪೂರ್ವಕವಾಗಿ ಆಲಿಸಿ ಪ್ರತಿಕ್ರಿಯೆ ನೀಡುತ್ತಾರೆ ಮತ್ತು ಪ್ರಶ್ನೆಗಳನ್ನು ಕೇಳುತ್ತಾರೆ.
2.ಕಥೆ,
ಕವಿತೆ ಮತ್ತು ಬೇರೆ ವಸ್ತು–ವಿಷಯಗಳನ್ನು ತನ್ನದೇ ರೀತಿಯಲ್ಲಿ ಮತ್ತು ಭಾಷೆಯಲ್ಲಿ ಹೇಳುತ್ತಾ ಅದರಲ್ಲಿ ತನ್ನದೇ ಸ್ವಂತದ ಕಥೆ ವಿಷಯಗಳನ್ನು ಜೋಡಿಸುತ್ತಾರೆ
3.ಓದಿದ ವಿಷಯ ವಸ್ತು ಮತ್ತು ತಮಗೆ ದೈನಂದಿನ ಜೀವನದಲ್ಲಿ ಸ್ವತಃ ಆದ ಅನುಭವಗಳನ್ನು ಸೇರಿಸಿ ಅವುಗಳಿಂದ ಉಂಟಾದ ಸಂವೇದನಾತ್ಮಕ ವಿಚಾರಗಳನ್ನು ಮೌಖಿಕವಾಗಿ ಅಥವಾ ಲಿಖಿತವಾಗಿ ಅಭಿವ್ಯಕ್ತಿಸುತ್ತಾರೆ. (ಆಡುಭಾಷೆ ಅಥವಾ ಗ್ರಾಂಥಿಕ ಭಾಷೆ)
4.ಸ್ತರಕ್ಕನುಸಾರವಾಗಿ ಬೇರೆ ವಿಷಯಗಳು,
ವ್ಯಕ್ತಿಗಳು,
ಕಲೆಗಳು ಮುಂತಾದವು (ಉದಾ: ಗಣಿತ, ವಿಜ್ಞಾನ, ಸಾಮಾಜಿಕ ಅಧ್ಯಯನ, ನೃತ್ಯ, ಕಲೆ,
ಚಿಕಿತ್ಸೆ ಮುಂತಾದವು) ಗಳಲ್ಲಿ ಪ್ರಯೋಗಿಸಿರುವ ಶಬ್ದಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.
5.ವಿವಿಧ ಪರಿಸ್ಥಿತಿ ಮತ್ತು ಉದ್ದೇಶಗಳಿಗೆ (ಸೂಚನಾ ಫಲಕದಲ್ಲಿ ಹಾಕುವ ಸೂಚನೆಗಳು, ವಸ್ತುಗಳ
ಪಟ್ಟಿ,
ಕಥೆ,
ಕವಿತೆ,
ಪತ್ರ,
ಪ್ರಬಂಧ) ಮುಂತಾದವುಗಳ ಅನುಸಾರವಾಗಿ ಬರೆಯುತ್ತಾರೆ.
6.ವಿವಿಧ ಸಾಹಿತ್ಯಗಳನ್ನು ಪರಸ್ಪರ ಕೇಳಲು, ಓದಲು
ಮತ್ತು ಅವುಗಳ ಮೇಲೆ ತಮ್ಮ ಅನಿಸಿಕೆ ನೀಡಲು ಅವುಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಸೇರಿಸಲು, ವಿಸ್ತರಿಸಲು
ಸಮರ್ಥರಾಗುತ್ತಾರೆ ಮತ್ತು ಬೇರೆ ಬೇರೆ ವಿಧಾನದಲ್ಲಿ ಬರೆಯುತ್ತಾರೆ.
7.ತಮ್ಮ ಆಸುಪಾಸಿನಲ್ಲಿ ಸಂಭವಿಸುವ ವಿವಿಧ ಘಟನೆಗಳ,
ಅಂಶಗಳ ಬಗ್ಗೆ ಗಮನಹರಿಸುತ್ತಾ ಮತ್ತು ಆಲಿಸಿದ ಸಾಹಿತ್ಯಗಳ (ಹಾಸ್ಯ,
ಸಾಹಸ,
ಸಾಮಾಜಿಕ,
ಮುಂತಾದ ವಿಷಯಗಳನ್ನು ಆಧರಿಸಿದ ಕಥೆ, ಕವಿತೆ
ಮುಂತಾದವುಗಳು) ವಿಷಯವಸ್ತು, ಘಟನೆಗಳು, ಚಿತ್ರಗಳು,
ಪಾತ್ರಗಳು,
ಶಿರೋನಾಮೆಗಳ ಬಗ್ಗೆ ಮಾತನಾಡುತ್ತಾರೆ. ಪ್ರಶ್ನಿಸುತ್ತಾರೆ, ಸ್ವತಃ ಟಿಪಣಿ ನೀಡುತ್ತಾರೆ,
ತಮ್ಮ ಮಾತಿಗೆ ತರ್ಕ ಮಾಡುತ್ತಾರೆ. ತಾರ್ಕಿಕವಾಗಿ ಚಿಂತಿಸಿ, ಚರ್ಚಿಸಿ, ನಿರ್ಣಯಕ್ಕೆ ಬರುತ್ತಾರೆ.
8.ತಮ್ಮ ಪಠ್ಯ ಪುಸ್ತಕದ ಹೊರತಾಗಿ ಬೇರೆ ವಿಷಯ ಸಾಮಗ್ರಿಗಳನ್ನು ಸಮಾಚಾರ ಪತ್ರಿಕೆ,
ಬಾಲ ಪತ್ರಿಕೆ ಮುಂತಾದವು ಓದಿ ತಿಳಿಯುತ್ತಾರೆ ಮತ್ತು ಅವುಗಳ ಬಗ್ಗೆ ಮಾತನಾಡುತ್ತಾರೆ ಮತ್ತು ಚರ್ಚಿಸುತ್ತಾರೆ.
9.ವಿವಿಧ ರೀತಿಯ ವಿಷಯ ಸಾಮಗಿಗಳಲ್ಲಿ ವೃತ್ತಪತ್ರಿಕೆ,
ಬಾಲಪತ್ರಿಕೆ,
ಮಕ್ಕಳ ಸಾಹಿತ್ಯ, ಪೋಸ್ಟರ್
ಇತ್ಯಾದಿಗಳಲ್ಲಿ ಕಂಡುಬರುವ ಸಂವೇದನಾ ಶೀಲ ಅಂಶಗಳನ್ನು ಗುರುತಿಸಿ ತನ್ನ ಮಾತಿನಲ್ಲಿ, ಬರೆಹದಲ್ಲಿ
ವ್ಯಕ್ತಪಡಿಸುತ್ತಾರೆ.
10.ವಿವಿಧ ಪರಿಸ್ಥಿತಿ ಮತ್ತು ಉದ್ದೇಶಗಳಿಗಾಗಿ ಬೋರ್ಡ್ ಮೇಲೆ ಬರೆದ ಸೂಚನೆ, ಕಾರ್ಯಕ್ರಮದ
ವರದಿ,
ಪತ್ರ ಮುಂತಾದವುಗಳನ್ನು ತಿಳಿದುಕೊಳ್ಳುವ ಉದ್ದೇಶದಿಂದ ಓದಿ ನಕಲು ಮಾಡುತ್ತಾರೆ.ಮತ್ತು ಬೇರೆ–ಬೇರೆ ಪರಿಸರ ಮತ್ತು ಉದ್ದೇಶಗಳಿಗಾಗಿ (ಸೂಚನಾ ಫಲಕದಲ್ಲಿ ಹಾಕಿರುವ ಸೂಚನೆ ಕಾರ್ಯಕ್ರಮಗಳ ಪಟ್ಟಿ ಜ್ಞಾನ ಪಡೆದುಕೊಳ್ಳಲು) ಓದುತ್ತಾರೆ ಮತ್ತು ಬರೆಯುತ್ತಾರೆ.
11.ಸ್ವಇಚ್ಛೆಯಿಂದ ಅಥವಾ ಶಿಕ್ಷಕರಿಂದ ನಿರ್ಧರಿಸಿದ ಚಟುವಟಿಕೆಗಳಲ್ಲಿ ಬರೆವಣಿಗೆ ಪ್ರಕ್ರಿಯೆಗಳ ಬಗ್ಗೆ ತಿಳಿದು ತಮ್ಮ ಬರೆವಣಿಗೆಯನ್ನು ಉತ್ಕೃಷ್ಟಗಳಿಸಿಕೊಳ್ಳುತ್ತಾರೆ, ಬರವಣಿಗೆಯ ಉದ್ದೇಶ ಮತ್ತು ಓದುಗನಿಗೆ ಅನುಸಾರವಾಗಿ ತಮ್ಮ ಬರವಣಿಗೆಯಲ್ಲಿ ಪರಿವರ್ತನೆ ಮಾಡುತ್ತಾರೆ. ಉದಾಹರಣೆಗೆ ಯಾವುದಾದರೊಂದು ಘಟನೆಯ ಬಗ್ಗೆ ತಿಳಿಸಲು ಮತ್ತು ಸ್ನೇಹಿತರಿಗೆ ಪತ್ರ ಬರೆಯುವುದು,
12. ಗ್ರಂಥ ಖುಣ
CLICK HERE TO DOWNLOAD ABOVE LEARNING OUTCOMES IN PDF