Class – 7 Kannada (SL) | Marks – 40 ಎರಡನೆಯ ಸಂಕಲಣಾತ್ಮಕ ಮೌಲ್ಯಮಾಪನ (SA-2) 2025-26 ಮಾದರಿ ಪ್ರಶ್ನಪತ್ರಿಕೆ – 2
ಇಲ್ಲಿ Class 7 Kannada (SL) ವಿಷಯಕ್ಕಾಗಿ ಎರಡನೆಯ ಸಂಕಲಣಾತ್ಮಕ ಮೌಲ್ಯಮಾಪನ (SA-2) 2025-26 ಗೆ ಸಂಬಂಧಿಸಿದ ಮಾದರಿ ಪ್ರಶ್ನಪತ್ರಿಕೆ – 2 ಅನ್ನು ನೀಡಲಾಗಿದೆ. ಈ ಪ್ರಶ್ನಪತ್ರಿಕೆಗಳು ಕರ್ನಾಟಕ ರಾಜ್ಯ ಪಠ್ಯಕ್ರಮ ಮತ್ತು ಅಧ್ಯಯನ ಫಲಿತಾಂಶ ಆಧಾರಿತ ಮೌಲ್ಯಮಾಪನ (LBA – Learning Outcomes Based Assessment) ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟು ಸಿದ್ಧಪಡಿಸಲಾಗಿದೆ.
ವಿದ್ಯಾರ್ಥಿಗಳು ವರ್ಷಪೂರ್ತಿ ಕಲಿತ ಪಾಠಗಳು, ಭಾಷಾ ಕೌಶಲ್ಯಗಳು ಮತ್ತು ಅಭಿವ್ಯಕ್ತಿ ಸಾಮರ್ಥ್ಯಗಳನ್ನು ಪರಿಶೀಲಿಸಲು ಸಂಕಲಣಾತ್ಮಕ ಮೌಲ್ಯಮಾಪನ – 2 ಪರೀಕ್ಷೆ ಅತ್ಯಂತ ಮುಖ್ಯವಾಗಿದೆ. ಈ ಮಾದರಿ ಪ್ರಶ್ನಪತ್ರಿಕೆ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಮಾದರಿಯನ್ನು ಅರ್ಥಮಾಡಿಕೊಳ್ಳಲು, ಪ್ರಶ್ನೆಗಳ ರಚನೆ ತಿಳಿದುಕೊಳ್ಳಲು ಮತ್ತು ಪರೀಕ್ಷೆಗೆ ಉತ್ತಮ ರೀತಿಯಲ್ಲಿ ಸಿದ್ಧರಾಗಲು ಸಹಾಯ ಮಾಡುತ್ತದೆ.
ಈ ಪ್ರಶ್ನಪತ್ರಿಕೆಯಲ್ಲಿ ಪಠ್ಯಪುಸ್ತಕದ ಅಧ್ಯಾಯಗಳನ್ನು ಆಧರಿಸಿ ವಿವಿಧ ರೀತಿಯ ಪ್ರಶ್ನೆಗಳು ಸೇರಿಸಲಾಗಿದೆ. ಉದಾಹರಣೆಗೆ –
- ವಸ್ತುನಿಷ್ಠ ಪ್ರಶ್ನೆಗಳು
- ಖಾಲಿ ಜಾಗಗಳನ್ನು ತುಂಬಿ
- ಸರಿಯಾದ ಉತ್ತರವನ್ನು ಆಯ್ಕೆಮಾಡಿ
- ಸಂಕ್ಷಿಪ್ತ ಉತ್ತರ ಪ್ರಶ್ನೆಗಳು
- ವಿವರಣಾತ್ಮಕ ಪ್ರಶ್ನೆಗಳು
- ಭಾಷಾ ಕೌಶಲ್ಯಗಳ ಪರಿಶೀಲನೆಗೆ ಸಂಬಂಧಿಸಿದ ಪ್ರಶ್ನೆಗಳು
ಈ ಎಲ್ಲಾ ಪ್ರಶ್ನೆಗಳು ವಿದ್ಯಾರ್ಥಿಗಳ ಓದು, ಬರಹ, ಅರ್ಥಗ್ರಹಣ ಮತ್ತು ಅಭಿವ್ಯಕ್ತಿ ಕೌಶಲ್ಯಗಳನ್ನು ಪರಿಶೀಲಿಸುವ ಉದ್ದೇಶದಿಂದ ರಚಿಸಲಾಗಿದೆ. ವಿದ್ಯಾರ್ಥಿಗಳು ಪರೀಕ್ಷೆಗೆ ಮೊದಲು ಈ ಪ್ರಶ್ನಪತ್ರಿಕೆಯನ್ನು ಅಭ್ಯಾಸ ಮಾಡಿದರೆ ಪರೀಕ್ಷೆಯ ಬಗ್ಗೆ ಆತ್ಮವಿಶ್ವಾಸ ಹೆಚ್ಚಾಗುತ್ತದೆ.
ಈ ವೆಬ್ಸೈಟ್ನಲ್ಲಿ ನೀಡಿರುವ ಎಲ್ಲಾ ಪ್ರಶ್ನಪತ್ರಿಕೆಗಳು Printable PDF Format ನಲ್ಲಿ ಲಭ್ಯವಿವೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಅವುಗಳನ್ನು ಸುಲಭವಾಗಿ ಡೌನ್ಲೋಡ್ ಮಾಡಿ ಮುದ್ರಿಸಿ ಬಳಸಬಹುದು.
These question papers are only for model purpose. Teachers can change any question or content as per their requirement.
ಈ ಪ್ರಶ್ನಪತ್ರಿಕೆಗಳು ಕೇವಲ ಮಾದರಿ (Model) ಉದ್ದೇಶಕ್ಕಾಗಿ ಮಾತ್ರ ನೀಡಲಾಗಿದೆ. ಶಿಕ್ಷಕರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಯಾವುದೇ ಪ್ರಶ್ನೆ ಅಥವಾ ವಿಷಯವನ್ನು ಬದಲಾಯಿಸಬಹುದು.
a) ಧೈರ್ಯ
b) ಹಿರಿಯ
a) ಮರದೊಳಗೆ
b) ಬಂದುಂಡು
ಕೊಳದಲಿರುವ ______________
_________________ ಬೆಳೆಸಿತು
_________________ ಹೇಳತೊಡಗಿತು
ಹಕ್ಕಿಯಂತೆ ________________
1. ಗೆಳೆಯರ ಹೆಸರುಗಳೇನು?
2. ಅವರು ಶಾಲೆಯ ಕೈತೋಟದಲ್ಲಿ ಯಾವ ಗಿಡವನ್ನು ನೆಟ್ಟರು?
3. ಮರಗಳು ನಮಗೆ ಏನೇನು ಕೊಡುತ್ತವೆ?
4. ಈ ಕಥೆಯ ನೀತಿ (message) ಏನು?
ಮಾದರಿ ಉತ್ತರ ಪತ್ರಿಕೆ (MODEL ANSWER SHEET)
ಪ್ರಶ್ನೆ 1: 1. C) ಇಲಿಗಳ, 2. A) ದುಃಖ, 3. B) ಹೂಕೋಸು, 4. B) ದಾದಿ.
ಪ್ರಶ್ನೆ 2: 1. ಜಿನಚಂದ್ರ, 2. ಒಂದು, 3. ಒಮ್ಮೆ, 4. ಮಾಡು.
ಪ್ರಶ್ನೆ 3:
1. ನೆಲ, ಜಲ, ಕಾಡು ಇವೆಲ್ಲವೂ ನಮಗೆ ಪ್ರಕೃತಿ ಕೊಟ್ಟ ಕೊಡುಗೆಗಳು.
2. ಹಕ್ಕಿಯಂತೆ ಬಾನಲೊಮ್ಮೆ ಹಾರಬೇಕು ಎಂಬ ಆಸೆ ಕೊಳದಲ್ಲಿನ ಆಮೆಗೆ ಮೂಡಿತು.
3. ಭೀಮರಾಯನು ಗೆರಿಲ್ಲಾ (Guerrilla) ಯುದ್ಧದಲ್ಲಿ ಪರಿಣಿತನಾಗಿದ್ದನು.
4. ಸರ್ವಜ್ಞನ ವಚನಗಳನ್ನು ಮೊದಲ ಬಾರಿಗೆ ಉತ್ತಂಗಿ ಚನ್ನಪ್ಪನವರು ಸಂಗ್ರಹಿಸಿದರು.
ಪ್ರಶ್ನೆ 4:
1. ಜೋಗಿಯು ಬಿದಿರಿನ ಕೊಳಲನ್ನು ಬಾರಿಸುತ್ತಾ ಇಲಿಗಳನ್ನು ಹಳ್ಳದ ಕಡೆಗೆ ಕರೆದೊಯ್ದನು. ಕೊಳಲಿನ ಸ್ವರದಿಂದ ಮಂಕಾದ ಇಲಿಗಳು ನೀರಿನಲ್ಲಿ ಮುಳುಗಿ ಸತ್ತುಹೋದವು.
2. ಅತ್ತಿಮಬ್ಬೆಯು ತನ್ನ ಅಣ್ಣಂದಿರೊಂದಿಗೆ ಕತ್ತಿವರಸೆ, ಕುದುರೆ ಸವಾರಿ ಮತ್ತು ಬಿಲ್ವಿದ್ಯೆಗಳನ್ನು ಕಲಿತಳು.
3. ಹೊಳೆಗೆ ಕೊಳೆಯನ್ನು (ಕಸವನ್ನು) ಬೆರೆಸಬಾರದು. ಬಗೆ ಬಗೆಯ ಹೊಗೆಯನ್ನು ಉಗುಳಿ ಗಾಳಿಯನ್ನು ಮಲಿನಗೊಳಿಸಬಾರದು.
4. ಜಾತ್ರೆಗೆ ಬಹಳಷ್ಟು ಜನ ಬರುತ್ತಾರೆ. ಬಂದವರು ತಮಗೆ ಬೇಕಾದುದನ್ನು ಕೊಂಡುಕೊಳ್ಳಲು ಅನುಕೂಲವಾಗಲೆಂದು ದೂರದ ಊರುಗಳಿಂದ ವ್ಯಾಪಾರಸ್ಥರು ಬರುತ್ತಾರೆ. ಆದ್ದರಿಂದ ಜಾತ್ರೆಯಲ್ಲಿ ಬಹಳಷ್ಟು ಅಂಗಡಿಗಳು ಇರುತ್ತವೆ.
5. ರೋಗಿಯೊಬ್ಬನನ್ನು ಉಳಿಸಲು ತನ್ನಿಂದಾಗಿ ತಡವಾಗುತ್ತಿದೆಯಲ್ಲಾ ಎಂಬ ತಳಮಳವಿದ್ದ ಕಾರಣ ವೈದ್ಯನ ನಡಿಗೆಯಲ್ಲಿ ಧಾವಂತವಿತ್ತು.
6. ಈರುಳ್ಳಿಯನ್ನು ಇಂಗ್ಲಿಷ್ನಲ್ಲಿ ‘ಆನಿಯನ್’, ತೆಲುಗಿನಲ್ಲಿ ‘ಎರಗಡ್ಡ’, ತಮಿಳಿನಲ್ಲಿ ‘ವೆಂಗಾಯಂ’ ಎಂದು ಕರೆಯುತ್ತಾರೆ.
7. ಗುರುವಿನಿಂದ ಬಂಧುಗಳು, ದೈವಗಳು ಮತ್ತು ಪುಣ್ಯ ಲಭಿಸುತ್ತದೆ. ಜಗತ್ತಿಗೆಲ್ಲ ಗುರುವಿನಿಂದಲೇ ಮುಕ್ತಿ ದೊರೆಯುತ್ತದೆ ಎಂದು ಸರ್ವಜ್ಞ ಬಣ್ಣಿಸಿದ್ದಾನೆ.
8. ಧ್ವನಿ ಅಥವಾ ಶಬ್ದವನ್ನು ಯಥಾವತ್ತಾಗಿ ಅನುಕರಿಸಿ ಹೇಳುವ ಪದಗಳನ್ನು ‘ಅನುಕರಣಾ ಅವ್ಯಯ’ ಎನ್ನುತ್ತಾರೆ. ಉದಾಹರಣೆ: ಜುಳುಜುಳು, ಭಣ ಭಣ.
9. a) ಧೈರ್ಯ × ಅಂಜಿಕೆ / ಹೆದರಿಕೆ b) ಹಿರಿಯ × ಕಿರಿಯ
10. a) ಮರದ + ಒಳಗೆ b) ಬಂದು + ಉಂಡು
ಪ್ರಶ್ನೆ 5:
5.1. ಕೊಳದಲಿರುವ ಆಮೆಗೊಂದು ಆಸೆ ಮೂಡಿತು
ಬಳಿಯಲಿರುವ ಹಂಸಗಳಲಿ ಸಂಗ ಬೆಳೆಸಿತು
ಮನದಲಿರುವ ಬಯಕೆಯನ್ನು ಹೇಳತೊಡಗಿತು
ಹಕ್ಕಿಯಂತೆ ಬಾನಲೊಮ್ಮೆ ಹಾರಲೆಂದಿತು
5.2. 1. ಗೆಳೆಯರ ಹೆಸರು ರವಿ ಮತ್ತು ಸೋಮು.
2. ಅವರು ಶಾಲೆಯ ಕೈತೋಟದಲ್ಲಿ ಮಾವಿನ ಗಿಡವನ್ನು ನೆಟ್ಟರು.
3. ಮರಗಳು ನಮಗೆ ಗಾಳಿ, ನೆರಳು ಮತ್ತು ಹಣ್ಣುಗಳನ್ನು ಕೊಡುತ್ತವೆ.
4. ನಾವು ಮರಗಳನ್ನು ಬೆಳೆಸಬೇಕು ಮತ್ತು ಪರಿಸರವನ್ನು ರಕ್ಷಿಸಬೇಕು ಎಂಬುದು ಈ ಕಥೆಯ ನೀತಿ.
ಮೌಖಿಕ ಪರೀಕ್ಷೆ (ORAL TEST) – 20 ಪ್ರಶ್ನೆಗಳು
- ಇಲಿಯೂರಿನಲ್ಲಿ ಯಾರ ಕಾಟ ಹೆಚ್ಚಾಗಿತ್ತು? (ಉತ್ತರ: ಇಲಿಗಳ)
- ಅತ್ತಿಮಬ್ಬೆಯ ತಂದೆಯ ಹೆಸರೇನು? (ಉತ್ತರ: ಮಲ್ಲಪಯ್ಯ)
- ‘ಕೊಳೆ’ ಎಂದರೆ ಏನು? (ಉತ್ತರ: ಕಸ / ಗಲೀಜು)
- ಜಾತ್ರೆಯಲ್ಲಿ ರಥ ಎಳೆಯುವುದು ಎಷ್ಟು ದಿನ? (ಉತ್ತರ: ಒಂದು ದಿನ)
- ಆಸ್ಪತ್ರೆಯಲ್ಲಿ ರೋಗಿಗಳನ್ನು ನೋಡಿಕೊಳ್ಳುವವರನ್ನು (Nurse) ಕನ್ನಡದಲ್ಲಿ ಏನೆಂದು ಕರೆಯುತ್ತಾರೆ? (ಉತ್ತರ: ದಾದಿ)
- ಆಮೆಗೆ ಎಲ್ಲಿ ಹಾರಲು ಆಸೆ ಇತ್ತು? (ಉತ್ತರ: ಬಾನಿನಲ್ಲಿ / ಆಕಾಶದಲ್ಲಿ)
- ಕಣ್ಣಿನಲ್ಲಿ ನೀರು ತರಿಸುವ ತರಕಾರಿ ಯಾವುದು? (ಉತ್ತರ: ಈರುಳ್ಳಿ)
- ಭೀಮರಾಯನು ಯಾವ ಕೋಟೆಯನ್ನು ವಶಪಡಿಸಿಕೊಂಡನು? (ಉತ್ತರ: ಕೊಪ್ಪಳ ಕೋಟೆ)
- ಸರ್ವಜ್ಞನು ಎಂತಹ ವಚನಗಳನ್ನು ಬರೆದಿದ್ದಾನೆ? (ಉತ್ತರ: ತ್ರಿಪದಿ)
- ಜುಳು ಜುಳು ಹರಿಯುವುದು ಯಾವುದು? (ಉತ್ತರ: ನದಿ / ಹೊಳೆ)
- ‘ಸಂತೋಷ’ ಪದದ ವಿರುದ್ಧಾರ್ಥಕ ಪದವೇನು? (ಉತ್ತರ: ದುಃಖ / ಬೇಸರ)
- ‘ಆರೋಗ್ಯ’ ಪದದ ವಿರುದ್ಧಾರ್ಥಕ ಪದವೇನು? (ಉತ್ತರ: ಅನಾರೋಗ್ಯ)
- ‘ಬಾನಲೊಮ್ಮೆ’ ಪದವನ್ನು ಬಿಡಿಸಿ ಹೇಳಿ. (ಉತ್ತರ: ಬಾನಲಿ + ಒಮ್ಮೆ)
- ‘ಓಡುತ್ತಾನೆ’ ಕ್ರಿಯಾಪದದ ಧಾತು (ಮೂಲರೂಪ) ಏನು? (ಉತ್ತರ: ಓಡು)
- ‘ಮನೆಮಾರು’ ಎಂಬುದು ದ್ವಿರುಕ್ತಿಯೋ ಅಥವಾ ಜೋಡುನುಡಿಯೋ? (ಉತ್ತರ: ಜೋಡುನುಡಿ)
- ಜೋಗಿ ಏನನ್ನು ಬಾರಿಸುತ್ತಿದ್ದನು? (ಉತ್ತರ: ಕೊಳಲು)
- ರನ್ನ ಮಹಾಕವಿಗೆ ಆಶ್ರಯ ಕೊಟ್ಟವರು ಯಾರು? (ಉತ್ತರ: ಅತ್ತಿಮಬ್ಬೆ)
- ಸಂಗೀತಕ್ಕೆ (ತಂಬೂರಿ ಮಾಡಲು) ಬಳಸುವ ತರಕಾರಿ ಯಾವುದು? (ಉತ್ತರ: ಸೋರೆಕಾಯಿ)
- ಆಮೆಯನ್ನು ಬಾನಿನಲ್ಲಿ ಯಾರು ಎತ್ತಿಕೊಂಡು ಹಾರಿದರು? (ಉತ್ತರ: ಹಂಸಗಳು)
- ‘ಹಿರಿಯ’ ಪದದ ವಿರುದ್ಧ ಪದವೇನು? (ಉತ್ತರ: ಕಿರಿಯ)



