NAAD GEET (नाडगीत)

 नाड गीत




  



 

जय भारत जननीय तनुजाते

जय हे कर्नाटक माते

जय सुंदर नदी वनगळ नाडे

जय हे रस ऋषीगळ बीडे 

भूदेवीय मकुटद नवमणीये

गंधद चंदद होन्नीन गणीये

राघव मधुसूदन रवतरिसीद

भारत जननिय तनुजाते

जय भारत जनानिय तनुजाते

जय हे कर्नाटक माते

जननिय जोगुळ वेदद घोष,

जननिगे जीववू निन्नावेश

हसुरीन गिरिगळ साले 

निन्नय कोरळीन माले

कपिल पतंजल गौतम जीननुत

भारत जननीय तनुजाते


जय भारत जननीय तनुजाते

 जय हे कर्नाटक माते


शंकर रामानुज विद्यारण्य 

बसवेश्वर मध्वर दिव्यारण्य 

रन्न षडक्षरी पोन्न

पंप लकुमिपती जन्न 

कुमारव्यासर मंगळधाम 

कवी कोगीलेगळ पुण्याराम 

नानक रामा नंद कबीरर

भारत जननीय तनुजाते 

जय भारत जननीय तनुजाते

 जय हे कर्नाटक माते

तैलप होयसळ राळीद नाडे 

डंकण जकणर नेच्चीन बीडे

कृष्ण शरावती तुंगा

कावेरिय वर रंगा 

चैतन्य परमहंस विवेकर 

भारत जननीय तनुजाते

सर्व जनागद शांतीय तोट

रसीकर कंगळ सेळेयूव नोट  

हिंदू क्रैस्त मुसलमान

पारसिक जैन रुद्यान

जनकन होलुव दोरेगळ धाम

गायक वैनिकराराम

कन्नड नुडी कुनिदाडूव गेह

कन्नड तायीय मक्कळ देह

जय भारत जननीय तनुजाते 

जय हे कर्नाटक माते.. 

– कुवेंपू 

 




 

ಜಯ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!
ಜಯ ಸುಂದರ ನದಿ ವನಗಳ ನಾಡೇ,
ಜಯ ಹೇ ರಸಋಷಿಗಳ ಬೀಡೆ!
ಭೂದೇವಿಯ ಮಕುಟದ ನವಮಣಿಯೆ,
ಗಂಧದ ಚಂದದ ಹೊನ್ನಿನ ಗಣಿಯೆ;
ರಾಘವ ಮಧುಸೂಧನರವತರಿಸಿದ
ಭಾರತ ಜನನಿಯ ತನುಜಾತೆ !

ಜನನಿಯ ಜೋಗುಳ ವೇದದ ಘೋಷ,
ಜನನಿಗೆ ಜೀವವು ನಿನ್ನಾವೇಶ
ಹಸುರಿನ ಗಿರಿಗಳ ಸಾಲೇ,ನಿನ್ನಯ ಕೊರಳಿನ ಮಾಲೆ
ಕಪಿಲ ಪತಂಜಲ ಗೌತಮ ಜಿನನುತ,
ಭಾರತ ಜನನಿಯ ತನುಜಾತೆ !

ಶಂಕರ ರಾಮಾನುಜ ವಿದ್ಯಾರಣ್ಯ,
ಬಸವೇಶ್ವರ ಮಧ್ವರ ದಿವ್ಯಾರಣ್ಯ
ರನ್ನ ಷಡಕ್ಷರಿ ಪೊನ್ನ,
ಪಂಪ ಲಕುಮಿಪತಿ ಜನ್ನ
ಕುಮಾರವ್ಯಾಸನ ಮಂಗಳ ಧಾಮ,
ಕವಿ ಕೋಗಿಲೆಗಳ ಪುಣ್ಯಾರಾಮ
ನಾನಕ ರಾಮಾನಂದ ಕಬೀರರ
ಭಾರತ ಜನನಿಯ ತನುಜಾತೆ !

ತೈಲಪ ಹೊಯ್ಸಳರಾಳಿದ ನಾಡೇ,
ಡಂಕಣ ಜಕಣರ ನಚ್ಚಿನ ಬೀಡೆ
ಕೃಷ್ಣ ಶರಾವತಿ ತುಂಗ,
ಕಾವೇರಿಯ ವರ ರಂಗ
ಚೈತನ್ಯ ಪರಮಹಂಸ ವಿವೇಕರ,
ಭಾರತ ಜನನಿಯ ತನುಜಾತೆ !

ಸರ್ವ ಜನಾಂಗದ ಶಾಂತಿಯ ತೋಟ,
ರಸಿಕರ ಕಂಗಳ ಸೆಳೆಯುವ ನೋಟ
ಹಿಂದೂ ಕ್ರೈಸ್ತ ಮುಸಲ್ಮಾನ,
ಪಾರಸಿಕ ಜೈನರುದ್ಯಾನ
ಜನಕನ ಹೋಲುವ ದೊರೆಗಳ ಧಾಮ,
ಗಾಯಕ ವೈಣಿಕರಾರಾಮ
ಕನ್ನಡ ನುಡಿ ಕುಣಿದಾಡುವ ಗೇಹ,
ಕನ್ನಡ ತಾಯಿಯ ಮಕ್ಕಳ ದೇಹ
ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ

ಸಾಹಿತ್ಯ: ಕುವೆಂಪು

 



 





Share with your best friend :)
WhatsApp Group Join Now
WhatsApp Students Group Join Now
Telegram Group Join Now